ಧ್ಯಾನದ ಬಗ್ಗೆ
ಧ್ಯಾನ ಮಾಡಲು ಆರಂಭ ಮಾಡುವ ಮೊದಲು ಕೆಲವು ಸಂಗತಿಗಳು ನೆನಪಿಡಿ
ನೀವು ಅದನ್ನು ದೇವರ ಪರೀಕ್ಷೆ ಎಂದು ಪರಿಗಣಿಸಿ, ಬಿಡದೆ ಸತತ ಪ್ರಯತ್ನ ಮಾಡಿದ ಮೇಲೆಯೇ ನಿಮಗೆ ಧ್ಯಾನ ಸಿದ್ದಿಸುತ್ತದೆ. ನಮ್ಮ ಕರ್ಮಗಳು ನಿಮಗೆ ಆರಂಭದಲ್ಲಿ ತೊಂದರೆ ಕೊಡುತ್ತವೆ, ಧ್ಯಾನಕ್ಕೆ ಅಡ್ಡಿ ಆತಂಕಗಳು ಬರುತ್ತೇವೆ. ಆದರೆ ಸತತ ಪ್ರಯತ್ನ ಮತ್ತು ಛಲ ಇದ್ದರೆ ಧ್ಯಾನ ಬೇಗ ಸಿದ್ಧಿಸುತ್ತದೆ.
ನಾನು ಇದನ್ನು ನಿಮಗೆ ಪ್ರೇರೇಪಿಸಲು ಹೇಳುತ್ತಿಲ್ಲ, ಅದು ನನ್ನ ಅನುಭವ. ಅಷ್ಟೇ ಅಲ್ಲ ಧ್ಯಾನದ ಆರಂಭದಲ್ಲಿ ನನ್ನಲ್ಲಿ ಯಾವ ಶಕ್ತಿಯೂ ಇರಲಿಲ್ಲ. ಧ್ಯಾನ ಮಾಡುತ್ತಾ ಮಾಡುತ್ತಾ, ಈಗ ದಿನ ಪೂರ್ತಿ ಕೆಲಸ ಮಾಡಿದರು, ಮತ್ತು ನನ್ನಲ್ಲಿ ಬತ್ತದ ಶಕ್ತಿ ಇರುತ್ತದೆ.
ಸಹನೆ, ಛಲ, ಸತತ ಪ್ರಯತ್ನ ಇದ್ದರೆ, ಧ್ಯಾನ ಸಾದನೆ ಸುಲಭ ಮತ್ತು ಬೇಗ ಸಿದ್ಧಿಸುತ್ತದೆ.
ಧ್ಯಾನ ಮಾಡುವಾಗ ಆರಂಭದಲ್ಲಿ ಕಾಲು ಜೋಮು ಹಿಡಿಯುವುದು, ಬೆನ್ನು, ಕುತ್ತಿಗೆ ನೋವು ಬರುವುದು, ನೂರಾರು ಯೋಚನೆಗಳು ಬರುವುದು ಸಾಮಾನ್ಯ.
ಧ್ಯಾನ ಮಾಡಲು ಆರಂಭಿಸಿದ ಮೇಲೆ 10 ಅಥವಾ 20 ದಿನಗಳ ಕಾಲ,
ನಮ್ಮ ಮೆದುಳಲ್ಲಿ ಇರುವ ಎಲ್ಲಾ ಹಳೆಯ ನೆನಪುಗಳು ಬರುವವು, ಅವುಗಳ ವಿಷಯಕ್ಕೆ ಸಂಬಂಧಿಸಿದಂತೆ ಕಣ್ಣೆರು ಬರಬಹುದು, ಅಥವಾ ಕೋಪ ಬರಬಹುದು. ಆಗ ಧೃತಿಗೆಡದೆ, ಧ್ಯಾನದ ಮೇಲೆ ಮನಸ್ಸನ್ನು ಇರಿಸಿ ಅಭ್ಯಾಸ ಮಾಡಬೇಕು. ಧ್ಯಾನ ಮನಸ್ಸಿನ ಕಸ ಗುಡಿಸುವ ಒಂದು ಕ್ರಿಯೆ, ಕೆಲ ದಿನಗಳ ನಂತರ ಎಲ್ಲಾ ಹಳೆಯ ನೆನಪುಗಳ ಕಸ ಮನಸ್ಸಿನಿಂದ ಹೊರಟು ಹೋಗಿ, ನಿಮ್ಮಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ.
ಧ್ಯಾನ ಮಾಡುವಾಗ, ಪ್ರತಿ ಬಾರಿ, ಯೋಚನೆ ಬಂದಾಗ ನೀವು ನಿಮ್ಮ ಮನದಲ್ಲಿ ಆತ್ಮ ಕ್ಷೇಮೆ ಎಂದು ಹೇಳಿಕೊಂಡು, ನಿಮ್ಮ ಗಮನವನ್ನು ಧ್ಯಾನದ ಮೇಲೆ ಅಥವಾ ಉಸಿರಿನ ಮೇಲೆ ತನ್ನಿ.
ನಿಮ್ಮ ಆತ್ಮದ ಹಳೆಯ ಸಂಸ್ಕಾರಗಳ ನೆನಪು ತರುತ್ತದೆ, ಅದನ್ನು ಕ್ಷಮಿಸಿ, ಆತ್ಮ ಕ್ಷೇಮೆ ಎಂದು ಹೇಳಿಕೊಂಡು, ನಿಮ್ಮ ಗಮನವನ್ನು ಉಸಿರಿನ ಮೇಲೆ ತನ್ನಿ.
ಹೀಗೇ ಅಭ್ಯಾಸ ಮಾಡಿದರೆ, ಕೆಲದಿನಗಳ ನಂತರ ನೀವು ಧ್ಯಾನದಲ್ಲಿ ಸಿಗುವ ಆನಂದ ಪಡೆಯಬಲ್ಲಿರಿ.
ನೀವು ಒಂದು ಗಂಟೆ ಘಾಡ ನಿದ್ರೆಯಲ್ಲಿ ಪಡೆಯುವ ವಿಶ್ವ ಶಕ್ತಿಯನ್ನು ಧ್ಯಾನದ ಉನ್ನತ ಸ್ಥಿತಿಯಲ್ಲಿ ಕೇವಲ ಒಂದು ನಿಮಿಷದಲ್ಲಿ ಪಡೆಯುತ್ತೀರಿ.
ನನಗೂ ಸಹ ಧ್ಯಾನ ಆರಂಭ ಮಾಡಿದ ಹೊಸದರಲ್ಲಿ, ಹಳೆಯ ನೆನಪುಗಳು ಬಂದು ಕಣ್ಣಲ್ಲಿ ನೀರು ಬರುತ್ತಿತ್ತು. ನಾನು ಪದೆ ಪದೆ ಮನಸ್ಸನ್ನು ಧ್ಯಾನದ ಮೇಲೆ ಕೊಟ್ಟು ಕೊಟ್ಟು ಅಭ್ಯಾಸ ಮಾಡಿದೆ.
ಆರಂಭದಲ್ಲಿ ಒಂದು ಗಂಟೆ ಧ್ಯಾನ ಮಾಡಲು ಆಗದಿದ್ದರೆ, ಇಪ್ಪತ್ತು ನಿಮಿಷ ಮಾಡಿ, ಕೆಲವು ದಿನಗಳ ನಂತರ, ನಿಮಗೆ ಒಂದು ಗಂಟೆ ಧ್ಯಾನ ಮಾಡುವುದು ತುಂಬಾ ಸುಲಭ ಆಗುತ್ತದೆ.
ನೀವು ಧ್ಯಾನ ಮಾಡಲು ಅದಕ್ಕೆ ಅನುಸರಿಸಬೇಕಾದ ಪದ್ದತಿಗೆ, ಈ ವಿಡಿಯೋ ನೋಡಿ: ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಗುರು ರಾಘವೇಂದ್ರ, ರಮಣ ಮಹರ್ಷಿ & ಸಾಯಿಬಾಬಾ ಮಹಿಮೆ
ಧ್ಯಾನದಲ್ಲಿ ಯಾವ ಹಂತಗಳು ಇವೆ, ಯಾವ ಹಂತದಲ್ಲಿ ಯಾವ ರೀತಿಯ ಬದಲಾವಣೆಗಳು ಆಗುತ್ತವೆ ಎಂದು ತಿಳಿಯಲು, ಈ ವಿಡಿಯೋ ನೋಡಿ: ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು
ಗುರುವಿನ ಮಾರ್ಗ ದರ್ಶನ ಇದ್ದರೆ ಸುಲಭ, ಆದರೆ, ಒಳ್ಳೆಯ ಸಂಕಲ್ಪ ಮಾಡಿ ನೀವು ಆಧ್ಯಾತ್ಮದ ಸಾದನೆ ಮಾಡಲು ಹೊರಟರೆ, ನಿಮಗೆ ಬೇಕಿರುವ ಎಲ್ಲಾ ಮಾಹಿತಿ ಮತ್ತು ಗುರುಗಳು ಆಯಾ ಸಮಯಕ್ಕೆ ನಿಮಗೆ ಸಿಗುತ್ತಾರೆ. ನನಗೆ ಧ್ಯಾನ ಮಾಡಲು ಯಾವ ಗುರುಗಳು ಮಾರ್ಗ ದರ್ಶನ ನೀಡಲಿಲ್ಲ, ನಾನು ಮನದಲ್ಲಿ ಧ್ಯಾನ ಮಾಡಬೇಕು ಎಂದು ಒಂದು ಸಂಕಲ್ಪ ಮಾಡಿದೆ, ಆಗ ನನಗೆ ಬೇಕಾದ ಗುರುಗಳು, ಮಾಹಿತಿ ಮತ್ತು ಸಹಾಯ ನನಗೆ ಇಂಟರ್ನೆಟ್, ಪುಸ್ತಕ ಮತ್ತು ವಿಡಿಯೋಗಳಿಂದ ದೊರೆಯಿತು.
ನೀವು ಒಳ್ಳೆಯ ಸಂಕಲ್ಪ ಮಾಡಿ ಧ್ಯಾನ ಆರಂಭ ಮಾಡಿದರೆ ಅದಕ್ಕೆ ಬೇಕಾದ ಎಲ್ಲಾ ಸಹಾಯ ನಿಮ್ಮ ಸಂಕಲ್ಪ ಶಕ್ತಿಯಿಂದಲೇ ಸಿಗುತ್ತದೆ. ಪೂರ್ಣ ವಿಸ್ವಾಸದಿಂದ ಸಂಕಲ್ಪ ಮಾಡಿ, ಧ್ಯಾನದ ಅಭ್ಯಾಸ ಆರಂಭ ಮಾಡಿ.
ದಿನವೂ ಧ್ಯಾನ ಮಾಡಿದರೆ ಎಲ್ಲರಿಗೂ ಆ ವಿಶ್ವದ ಜ್ಞಾನ ಸಿಗುತ್ತದೆ. ದಿನವೂ ಸ್ವಲ್ಪ ಕಾಲ ಧ್ಯಾನ ಮಾಡುವ ಅಭ್ಯಾಸ ಮಾಡಿದರೆ. ಆತ್ಮ ಶಕ್ತಿ ಮತ್ತು ವಿಶ್ವದ ಅನಂತ ಜ್ಞಾನ ನಿಮಗೂ ಸಿದ್ಧಿಸುತ್ತದೆ.
ಆಧ್ಯಾತ್ಮದ ಸಾಧಕರು ಇದರಲ್ಲಿ ಎಚ್ಚರ ವಹಿಸಬೇಕು:
1. ಅಹಂಕಾರ ಬಂದರೆ, ಆಧ್ಯಾತ್ಮದ ಶಕ್ತಿ ನಾಶವಾಗುತ್ತದೆ.
2. ಸಾಧಕರಲ್ಲಿ ಅತಿಯಾದ ಪ್ರಚೋದನೆ ಇರುತ್ತದೆ,
ಅದರ ಮೇಲೆ ಹಿಡಿತ ಸಾದಿಸಬೇಕು. ಮೋಹಕ್ಕೆ ಒಳಗಾಗಬಾರದು.
3. ಕೆಲವು ತೊಂದರೆಗಳು ಬರುತ್ತವೆ,
ಅವನ್ನು ಪ್ರೀತಿಯಿಂದ ಸ್ವೀಕರಿಸಿ, ಆಧ್ಯಾತ್ಮದ ಸಾಧನೆ ಮಾತ್ರ ನಿಲ್ಲಿಸ ಬಾರದು. ನಿಮಗೆ ಬರುವ ತೊಂದರೆಗಳು; ಅವು ಕೇವಲ ಪರೀಕ್ಷೆಗಳು
ಅಷ್ಟೇ.
4. ಯಾವುದೇ ಕಾರಣಕ್ಕೂ ಮನದಲ್ಲಿ ನಮ್ಮ ಬಗ್ಗೆ ನಾವು ಕೆಟ್ಟದ್ದನ್ನು ನೆನೆಯ ಬಾರದು,
ಆಧ್ಯಾತ್ಮದ ಸಾಧಕರಿಗೆ ಸಂಕಲ್ಪ ಶಕ್ತಿ ಜಾಸ್ತಿ ಇರುತ್ತದೆ, ಅದು ಬೇಗ ನಿಜವಾಗುತ್ತದೆ. ಒಂದು ವೇಳೆ ಕೆಟ್ಟ ಯೋಚನೆ ಬಂದರೆ, ಹತ್ತು ಬಾರಿ ದೇವರ ನಾಮ ಜಪ ಮಾಡಬೇಕು.
5. ಯಾರನ್ನು ದ್ವೇಷ ಮಾಡಬಾರದು,
ಮತ್ತು ಸುಳ್ಳು ಹೇಳಬಾರದು (ತೀರ ಅನಿವಾರ್ಯವಾದರೆ ಪ್ರಾಣ ಕಾಪಾಡಿಕೊಳ್ಳಲು ಸುಳ್ಳು ಹೇಳಿದರೆ ತಪ್ಪಿಲ್ಲ), ಕರ್ಮ ಸಿದ್ಧಾಂತದ ಮೇಲೆ ನಂಬಿಕೆ ಇರಬೇಕು.
6. ಇತರರನ್ನು ನೋಯಿಸುವ ಸತ್ಯವನ್ನು ಸಹ ಹೇಳಲು ಹೋಗಬಾರದು. ಇತರರನ್ನು ಸಂತೋಷ ಪಡಿಸಲು ಸುಳ್ಳು ಸಹ ಹೇಳಬಾರದು.
7. ಸುಖವನ್ನು ಮತ್ತು ದುಃಖವನ್ನು ಕೃತಜ್ಞತಾ ಭಾವದಿಂದ, ದೇವರ ಕೃಪೆ ಎಂದು ಸ್ವೀಕರಿಸಿದರೆ,
ಅವರಿಗೆ ಆ ದೇವರ ಅನುಗ್ರಹ ಬೇಗ ಸಿದ್ಧಿಸುತ್ತದೆ.
ಧ್ಯಾನ ಮಾಡಲು ಹೊಸದಾಗಿ ಆರಂಭ ಮಾಡುವವರು ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
ತ್ರಾಟಕ ಧ್ಯಾನ ತುಂಬಾ ಸುಲಭ ಮತ್ತು ಸರಳ, ಅದರಲ್ಲಿ ಪರಿಣಿತಿ ಪಡೆದ ಮೇಲೆ, ನೀವು ಯಾವ ಧ್ಯಾನ ಅಥವಾ ಜಪ ಮಾಡಿದರು ಅದು ತುಂಬಾ ಪರಿಣಾಮಕಾರಿಯಾಗಿ ಇರುತ್ತದೆ.
ಕೆಳಗಿನ ಎಲ್ಲಾ ವಿಡಿಯೋ ಒಮ್ಮೆ ನೋಡಿ, ನಂತರ ತ್ರಾಟಕ ಧ್ಯಾನದ ಮೂಲಕ ಧ್ಯಾನವನ್ನು ಆರಂಬಿಸಿ.
ಧ್ಯಾನಕ್ಕೆ ಬೇಕಾದ ಪೂರ್ವ ಸಿದ್ಧತೆ! ಗುರು ರಾಘವೇಂದ್ರ, ರಮಣ ಮಹರ್ಷಿ & ಸಾಯಿಬಾಬಾ ಮಹಿಮೆ... 👇
ಧ್ಯಾನದ ಯಾವ ಹಂತದಲ್ಲಿ ನೀವು ಇಚ್ಚಿಸಿದ್ದೆಲ್ಲ ಪಡೆಯಲು ಸಾಧ್ಯ? ಧ್ಯಾನದ ವಿವಿಧ ಹಂತಗಳು ... 👇
ಧ್ಯಾನಕ್ಕೆ ಪ್ರಪಂಚವನ್ನೇ ಗೆಲ್ಲುವ ಶಕ್ತಿ ಇದೆ!... 👇
ಧ್ಯಾನದಲ್ಲಿ ಮನಸ್ಸು ನಿಲ್ಲಿಸಲು ಕಷ್ಟ ಆಗುತ್ತಿದೆಯೇ? | ಮುಕ್ತಿ ಬೇಕೆ? |... 👇
ತ್ರಾಟಕ | ಆಜ್ಞಾ ಚಕ್ರಕ್ಕೆ ಮತ್ತು ಅತೀಂದ್ರಿಯ ಶಕ್ತಿ ವೃದ್ಧಿ, ಮನಸ್ಸಿನ ಮೇಲೆ ಹಿಡಿತ ಸಾಧಿಸುವ ವಿದ್ಯೆ!... 👇
ತ್ರಾಟಕ ಧ್ಯಾನ | ತ್ರಾಟಕ ಅಭ್ಯಾಸ |... 👇