Monday, April 7, 2025

ಜೀವನದಲ್ಲಿ ಸುಖ, ಸಂತೋಷ, ಆನಂದ ಮತ್ತು ಆರೋಗ್ಯ ಬೇಕೆಂದರೆ?

 

ನಿಮ್ಮ ಜೀವನದಲ್ಲಿ ಸುಖ, ಸಂತೋಷ, ಆನಂದ ಮತ್ತು ಆರೋಗ್ಯ ಬೇಕೆಂದರೆ, ಮೂರನ್ನು ಮಾಡಿ, ಮತ್ತು ಮೂರನ್ನು ಮಾಡಬೇಡಿ... 👇👇

 

ನೀವು ಮೂರನ್ನು ದಿನವೂ ತಪ್ಪದೇ ಆಚರಿಸಿ...👇

 

1. ದಿನವೂ ಕನಿಷ್ಠ ಒಂದು ಗಂಟೆ ಮಣ್ಣಿನ ನೆಲದ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿ. (97% ಮಾನಸಿಕ, ದೈಹಿಕ, ಆರೋಗ್ಯ ಸಮಸ್ಯೆಗಳು ಮಣ್ಣಿನ ನೆಲದ ಮೇಲೆ ಬರಿಗಾಲಿನಲ್ಲಿ ವಾಕ್ ಮಾಡಿದರೆ ಗುಣ ಆಗುತ್ತವೆ. ಅಷ್ಟೇ ಅಲ್ಲ, ಜೀರ್ಣ ಸಮಸ್ಯೆಗೆ, ಬರಿಗಾಲಿನ ನಡಿಗೆ ರಾಮ ಬಾಣ)

 

2. ದಿನವೂ ತಪ್ಪದೇ ಒಂದು ಗಂಟೆ ಸೂರ್ಯನ ಬಿಸಿಲಿಗೆ ಮೈಯೊಡ್ಡಿ. (ಮೂಳೆ, ಚರ್ಮ, ಮತ್ತು ಕ್ಯಾನ್ಸರ್ ಸಮಸ್ಯೆಗೆ, ಸೂರ್ಯನ ಬಿಸಿಲು ರಾಮ ಬಾಣ. ಅಷ್ಟೆ ಅಲ್ಲ ಮಧ್ಯಾಹ್ನ ಸೂರ್ಯನ ಬಿಸಿಲು, ತುಂಬಾ ಒಳ್ಳೆಯದು, ಇದು ವೈಜ್ಞಾನಿಕವಾಗಿ ಸಾಬೀತಾಗಿದೆ)

 

3. ದಿನವೂ ತಪ್ಪದೇ ಅರ್ಧ ಗಂಟೆ ಧ್ಯಾನ ಅಥವಾ ದೇವರ ನಾಮ ಜಪ ಮಾಡಿ. - ನಿಮ್ಮ ಇಷ್ಟ ದೇವರ ನಾಮ ಜಪ (ದೇವರನ್ನು ಬಿಟ್ಟವರು ಆಸ್ಪತ್ರೆ ಸೇರುವರು, ದೇವರ ಸ್ಮರಣೆ ಮಾಡುವವರು ಹಾಯಾಗಿ ಜೀವಿಸುವರು)

 

ನೀವು ಮೂರನ್ನು ಯಾವುದೇ ಕಾರಣಕ್ಕೂ ಮಾಡಬೇಡಿ... 👇

 

1. ಸಾಲ ಮಾಡಬೇಡಿ. - ಸಾಲ ನಿಮ್ಮ ಜೀವನದ ಶಾಂತಿ, ನೆಮ್ಮದಿ ಹಾಳುಮಾಡಿ, ಭಯ, ಆತಂಕ ಸೃಷ್ಟಿ ಮಾಡಿ ನಿಮ್ಮ ಆರೋಗ್ಯ ಹಾಳು ಮಾಡುತ್ತದೆ.

 

2. ಜೂಜು ಆಡಬೇಡಿ - ಚಟಗಳಲ್ಲಿ ಅತ್ಯಂತ ಕೆಟ್ಟ, ಅಪಾಯಕಾರಿ ಚಟ ಜೂಜು. ಇದು ನಿಮ್ಮ ಕುಟುಂಬವನ್ನೇ ನಾಶ ಮಾಡುತ್ತದೆ. ಶ್ರೀ ಕೃಷ್ಣ ಪಾಂಡವರ ಕಡೆ ಇದ್ದರು, ಜೂಜು ಆಡುವ ಸಮಯದಲ್ಲಿ ಕೃಷ್ಣ ಪಾಂಡವರಿಗೆ ಸಹಾಯ ಮಾಡಲಿಲ್ಲ. ಜೂಜು ಆಡುವವರನ್ನು ದೇವರು ಸಹ ಕಾಪಾಡುವುದಿಲ್ಲ.

 

3. ದುಶ್ಚಟ ಮಾಡಬೇಡಿ - (ಮದ್ಯಪಾನ, ತಂಬಾಕು, ಇತರೆ ಮತ್ತಿನ ಪದಾರ್ಥ) ಯಾರು ಇವಕ್ಕೆ ದಾಸರಾಗುವರೋ ಅವರನ್ನು ಎಲ್ಲರೂ ಕಡಗಣಿಸುವರು, ಅವರ ಗೌರವ ನಾಶ ಆಗುತ್ತದೆ. ಅದರ ಜೊತೆಗೆ ಆರೋಗ್ಯವೂ ಹಾಳಾಗಿ, ಇಡೀ ಕುಟುಂಬಕ್ಕೆ ಹಣದ ಸಮಸ್ಯೆ ಸೃಷ್ಟಿ ಆಗುತ್ತದೆ. 

 

ತಪ್ಪು ಮಾಡುವುದು ತಪ್ಪಲ್ಲ, ಅದನ್ನು ತಿದ್ದಿಕೊಳ್ಳದೆ ಇರುವುದು ತಪ್ಪು. ನಾನು ಸಹ ನನ್ನ ಜೀವನದಲ್ಲಿ ಸಾಕಷ್ಟು ತಪ್ಪು ಮಾಡಿದ್ದೇನೆ, ಅವನ್ನು ತಿದ್ದಿಕೊಂಡು, ಮನುಷ್ಯನಾಗಿ, ಈಗ ನನ್ನ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ. 

ಒಳ್ಳೆಯ ಮಾರ್ಗದಲ್ಲಿ ನಡೆಯಿರಿ, ಅದು ನಿಮಗೂ ಮತ್ತು ಸಮಾಜಕ್ಕೂ ಒಳ್ಳೆಯದು. ಶ್ರೀರಾಮನ ಕೃಪೆ ಎಲ್ಲರಿಗೂ ಸಿಗಲಿ ಎಂದು ಆಶಿಸುತ್ತೇನೆ.

                                                                                                                                                                                                             🙏 ಧನ್ಯವಾದಗಳು 🙏

                                                                                       💐 ಜಿ ಸಿ ವಿ  💐